Tuesday, August 25, 2009

ಶವದ್ಲಲಿ ಸೇರಿದ ಬೇತಾಳ

ಬೇತಾಳ ಗಹಗಹಿಸಿ ನಗತೊಡಗಿತು....
 ವಿಕ್ರಮಾದಿತ್ಯನಿಗೆ ಇನ್ನೂ ಬುದ್ಧಿ ಬರಲ್ಲಿಲವೇ? ತನ್ನ ಉದೇಶ ಈಡೇರದು, ಮೌನವ್ರತ ಸಫಲವಾಗದು, ಮರದ ಮೇಲಿನ ಶವಕ್ಕೆ ಸಂಸ್ಕಾರ ಕಾರ್ಯ ಎಂದೆಂದಿಗೂ ಪೂರ್ಣಗೊಳ್ಳದ ಮಾತು...

ಅದು ಯೋಚಿಸಿತು... ರಾಜಕಾರಣಿಗಳು ಸ್ವಂತ ಉದ್ಧಾರವನ್ನಷ್ಟೇ ಮಾಡುತ್ತಾರೆ ಎಂದು ಗೊತ್ತ್ದಿದೂ ಪದೇ ಪದೇ ಮತ ಚಲಾಯಿಸಲು ಉತ್ಸಾಹಿಯಾಗುವ ಮತದಾರನಂತೆ, ದೀಪ ಸುಡುತ್ತದೆ ಎಂದರಿತರೂ ಮತ್ತೆಮತ್ತೆ ಬೆಂಕಿಗೆ ಎರಗುವ ಪತಂಗದಂತೆ... ಮಹಾರಾಜ ಗೊತ್ತ್ದಿದೂ ಈ ನಿಷ್ಫಲ ಕೆಲಸಕ್ಕೆ ಸಿದ್ಧನಾಗ್ದಿದಾನೆ....
ಸ್ಮಶಾನ... ವಿದ್ಯುತ್ ಸ್ಥಗಿತದ ವೇಳೆ ಮಹಾನಗರದಂತೆ ಕಾಣಿಸುತ್ತಿದೆ. ಅಘೋರಿಗಳಂತೆ ಅಲಿ ಯಾರೋ ನಡೆದಾಡುತ್ತ್ದಿದಾರೆ! ಬೇತಾಳ ಗೂಬೆಯಂತೆ ಕಣ್ಣು ಕೀಲಿಸಿ ನೋಡಿತು. ತುಟಿಯ್ಲಲಿ ವ್ಯಂಗ್ಯ ನಗು.
ಮತ್ತಿನ್ನಾರು? ವಿಕ್ರಮಾದಿತ್ಯ!
ಸಹಸ್ರಾರು ವರ್ಷಗಳಿಂದ ಆ ಕೆಲಸ ಮಾಡುತ್ತ್ದಿದರೂ ದಣಿವರಿಯದ ವಿಕ್ರಮಾದಿತ್ಯ... ಕಂಪ್ಯೂಟರ್-ಟಿವಿ ಗಳ ಡಿಜಿಟಲ್ ಗೇಮ್‌ಗಳು ಬರುವುದಕ್ಕೆ ಮೊದಲು ಎಲರನ್ನೂ ತಮ್ಮ ಬಾಲ್ಯ ದ್ಲಲಿ ಕಥೆಯಾಗಿ ಕಾಡಿದ `ನಮ್ಮ ಜೋಡಿ' ಬೇತಾಳ ಒಂದು ಕ್ಷಣ ಮನದ್ಲಲೇ ಕಾಲಾತೀತ ನಡಿಗೆ ನಡೆಯಿತು...


ಇದು ಆ ವಿಕ್ರಮಾದಿತ್ಯನೇ ಅಥವಾ....
ಮೌನದ ವ್ರತ ತೊಟ್ಟು ಅಮಾವಾಸ್ಯೆ ಕತ್ತಲ್ಲಲಿ ದೆವ್ವವೂ ಹೆದರುವ ಕತ್ತಲ್ಲಲಿ ಸ್ಮಶಾನಕ್ಕೆ ಒಬ್ಬಂಟಿಯಾಗಿ ಭೇಟಿ ನೀಡಿ. ಶವ ನೇತಾಡುತ್ತ್ದಿದ ಮರವೇರಿ ಕೊಂಬೆಯ್ಲಲ್ದಿದ ಹಗ್ಗದ ಕುಣಿಕೆಯಿಂದ ಅದನ್ನು ಬೇರ್ಪಡಿಸಿ ಹೆಗಲಿಗೇರಿಸಿ ನಡೆಯತೊಡಗಿದ...
ಹಿನ್ನೆಲೆಯ ಅದ್ಯಾವುದೋ ಬಾರೋ, ಪಬ್ಬೋ ,ಗಬ್ಬೋ .. ಹುಡುಗಿಯ ಬೆನ್ನು ತಬ್ಬಿ ಯಾರೋ ಹಾಡಡುತ್ತ್ದಿದರು... `ಇಲೇ ಸ್ವರ್ಗ.. ಇಲೇ ನರಕ... ಬೇರೇ ಇಲ...'
ಹಾಡು ಕೇಳಿ ಬೇತಾಳ ರುದ್ರಭೂಮಿಯನ್ನು ಅವಲೋಕಿಸಿತು. `ಹೌದು. ಸರ್ಗ- ನರಕಗಳು ಇಲೇ... ಬೇರೆ ಎಲ್ಲೆಲಾ ಹುಡುಕುವುದು ವ್ಯರ್ಥ. ಇಲೇ ಹುಟ್ಟು- ಸಾವುಗಳು'... ಬೇತಾಳನ ತಲೆಯ್ಲಲಿ ಫಿಲಾಸಫಿಯಾ, ಮಿಥಾಲಜಿಯಾ! ಅಲ್ಲಲ 'ಮೃತಾ'ಲಜಿ ವ್ಯಂಗ್ಯದ ನಗೆಯಾಡಿತು.
ರಾಜ.. ಶವನ್ನು ಆಗಲೇ ಕೆಳಗಿಳಿಸಿ ಆಗಿತ್ತು. ಹೆಗಲಿಗೇರಿಸಿ - ಚಾಪೆ ತನಗೆ ತಾನೇ ಸುತ್ತಿಕೊಳ್ಳುವಂತೆ- ಬಂದ ದಾರಿಯ್ಲಲೇ ಮರಳಿ ಹೊರಟ.
ಆಗ... ಇನ್ನು ತಡಮಾಡಿದರೆ ರಾಜ ತನ್ನ ಪ್ರಯತ್ನದ್ಲಲಿ ಸಫಲನಾಗುತ್ತಾನೆ ಎ ಂದರಿತ ಬೇತಾಳ ತನ್ನ ಹಳೆಯ ಚಾಳಿಯನ್ನೇ ಮತ್ತೆ ಮುಂದು ವರಿಸಿತು.
ಶವದ್ಲಲಿ ಸೇರಿಕೊಂಡಿತು...


ರಾಜ ನಡೆಯಯುತ್ತ್ದಿದ... ಬೇತಾಳ ಹೈಜಾಕ್ ವಿಮಾನದ್ಲಲಿ ಕುಳಿತ ಭಯೋತ್ಪಾದಕನಂತೆ ಹೆಗಲ ಮೇಲಿನ ಶವದಿಂದ ಮಾತನಾಡ ತೊಡಗಿತು. (ಹಳೆಕಾಲದ ಕಾಮೆಂಟರಿ ರೇಡಿಯೋದಂತೆ )ವಿಕ್ರಮಾದಿತ್ಯನ ಕಿವಿಯ್ಲಲಿ ಮಾತನಾಡತೊಡಗಿತು.


ರಾಜನೇ... ಈ ಕೆಲಸ ನಿಷ್ಪ್ರಯೋಜಕ ಎಂದರಿತರೂ ನೀನು ಮತ್ತದೇ ಕೆಲಸ ಮಾಡುತ್ತಿರುವೆ. - ಬ್ರಾಂಚ್ ಕಚೇರಿಯ್ಲಲಿ ಕೆಲಸಕ್ಕೆ ಸೇರಿ ಅಲೇ ನಿವೃತ್ತನಾಗುವ ಪೋಸ್ಟ್‌ಮಾಸ್ಟರ್‌ನಂತೆ- ಎಂದು ಹೇಳಲಾರೆ. ಬೆಟ್ಟಕ್ಕೆ ಬಂಡೆ ಹೊತ್ತಂತೆ ವ್ಯರ್ಥ ಪ್ರಯತ್ನ ಇದು ಎಂದು ಪದೇ ಪದೇ ನಾನು ಹೇಳಿದೆ ನೀನು ಕೇಳಿಸಿಕೊಳ್ಳಲ್ಲಿಲ. ನನ್ನ ಸಲಹೆಯನ್ನು 'ಬಂಡೆಯ ಮೇಲೆ ಮಳೆ ಸುರಿದಂತೆ' ವ್ಯರ್ಥಮಾಡುತ್ತಿರುವೆ.
ಎಲೈ ರಾಜನೇ, ಆದರೂ ಕೇಳು... ನಿನಗೆ ಸಂಚಾರದ ಶ್ರಮ ಅರಿಯದಂತೆ ಕಥೆಯನ್ನು ( ಎಫ್. ಎಂ. ರೇಡಿಯೋದಂತೆ)ಹೇಳುವೆ. (ಕೆಲವು ರಿಯಾಲಿಟಿ ಶೋಗಳ್ಲಲಿ ಇರುವಂತೆ-) ಕೊನೆಯ್ಲಲಿ ಕೆಲವು ಪ್ರಶ್ನೆಗಳೂ ಇರುತ್ತವೆ ಅದಕ್ಕೆ ಸಮರ್ಪಕವಾಗಿ ಉತ್ತರಿಸು. ಪ್ರಶ್ನೆಗೆ ಉತ್ತರ ತಿಳಿದ್ದಿದರೂಉತ್ತರಿಸದ್ದಿದರೆ ನಿನ್ನ ತಲೆ (ಕೆಲವು ರಾಜಕೀಯ ಪಕ್ಷಗಳಂತೆ)ಳಂತೆ ಒಡೆದು ಚೂರಾಗುವುದು ಎಂದು ಹೇಳಿ ವಿಕ್ರಮಾದಿತ್ಯನನ್ನು (ಬಸ್‌ನ್ಲಲಿ ಪಕ್ಕ ಕುಳಿತ ಸೇಲ್ಸ್ ರೆಪ್ರೆಸೆಂಟೇಟಿವ್‌ನಂತೆ ಬೇಡದ್ದಿದರೂ) ಮಾತನಾಡಿಸತೊಡಗಿತು.
-ಮನದೊಳಗಿನ ಜಿಜ್ಞಾಸೆ ಬೇತಾಳವೇ? ಮನಕ್ಕೆ ಮನದ ವಿವೇಕಪೂರ್ಣ ಸಾಂತ್ವನ ವಿಕ್ರಮಾದಿತ್ಯನೇ? ಮೂಢನಂಬಿಕೆಗಳು ಶವಸ್ವರೂಪವೇ....? ಗೊತ್ತ್ಲಿಲ.
ಆದರೂ ...
ಬೇತಾಳ ವಿಕ್ರಮಾದಿತ್ಯನ ಮೌನ ಮುರಿಯವ ನಿರಂತರ ಪ್ರಯತ್ನ ನಡೆಯುತ್ತಿರುತ್ತದೆ...

No comments:

Post a Comment